ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ಸಿ. ಕೆ. ರಾಮಮೂರ್ತಿ ಬೆಂಗಳೂರು ಬಿಜೆಪಿ ದಕ್ಷಿಣ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ.
ಬೆಂಗಳೂರು ಬೆಂಗಳೂರಿನ ದಕ್ಷಿಣ ಜಿಲ್ಲೆಯ ಬಿಜೆಪಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಇಂದು ಜಿಲ್ಲಾ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗು ಜಿಲ್ಲಾ ಚುನಾವಣೆ ಅಧಿಕಾರಿಗಳಾದ . ಬಿ.ಎಸ್.ಅರುಣ್ ಮತ್ತು ಜಿಲ್ಲಾ ಉಪ ಚುನಾವಣಾ ಅಧಿಕಾರಿಗಳಾದ ಶ್ರೀ. ದೀಪಾಕ್ ಮಾಯಸಂದ್ರ ಅವರ ಉಪಸ್ಥಿತಿಯಲ್ಲಿ ನಡೆಯಿತು.
ಈ ಸಭೆಯಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ . ಎಂ ಕೃಷ್ಣಪ್ಪ , ಚಿಕ್ಕಪೇಟೆ ವಿಧಾನಸಭೆ ಶಾಸಕರಾದ . ಉದಯ್ ಗರುಡಾಚರ್ , .ಉಮೇಶ್ ಶೆಟ್ಟಿ , ರವೀಂದ್ರ ರವರು,.ಶ್ರೀಧರ್ ರೆಡ್ಡಿ ಅವರು ಹಾಗು ಜಿಲ್ಲೆಯ ಕೋರ್ ಕಮಿಟಿಯ ಇತರ ಸದಸ್ಯರು ಉಪಸ್ಥಿತರಿದ್ದರು.
ಸಭೆಯಲ್ಲಿ . ಸಿ. ಕೆ. ರಾಮಮೂರ್ತಿ ರವರನ್ನು ಸರ್ವಾನುಮತದಿಂದ ಅಧ್ಯಕ್ಷರಾಗಿ ಘೋಷಣೆ ಮಾಡಲಾಯಿತು.
ಸಭೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಪ್ರತಿನಿಧಿಯಾಗಿ . ಚಿನ್ನಗಿರಯಪ್ಪ ಅವರನ್ನು, ಬೆಂಗಳೂರು ದಕ್ಷಿಣ ಜಿಲ್ಲೆಯ ವ್ಯಾಪ್ತಿಗೆ ಬರುವ 8 ಮಂಡಲದ ಅಧ್ಯಕ್ಷರ ಹೆಸರುಗಳನ್ನು ಸಹ ಘೋಷಿಸಲಾಯಿತು.