ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಆನೇಕಲ್ ಪುರಸಭೆ ಹಾಲಿ ಅಧ್ಯಕ್ಷರಾದ ಸುಧಾ .ಬಿ. ನಿರಂಜನ್ ಮತ್ತು ಹಾಲಿ ಸದಸ್ಯರಾದ ಸುರೇಶ್ ಬಾಬು ಜಿ .ರವರನ್ನು 6 ವರ್ಷಗಳ ಕಾಲ ಬಿಜೆಪಿಯಿಂದ ಉಚ್ಚಾಟನೆ ""
ಆನೇಕಲ್ : ಬೆಂಗಳೂರು ದಕ್ಷಿಣ ಜಿಲ್ಲೆಯಾದ ಆನೇಕಲ್ ಪುರಸಭೆಯ ಅಧ್ಯಕ್ಷರಾದ ಸುಧಾ ಬಿ. ನಿರಂಜನ್ ಹಾಗೂ ಉಪಾಧ್ಯಕ್ಷರಾದ ಸುರೇಶ್ ಬಾಬು ಜಿ. ಚುನಾವಣಾ ಸಂದರ್ಭದಲ್ಲಿ ಪಕ್ಷದ ಸಂವಿಧಾನದ ನಿಯಮಗಳ ವಿರುದ್ಧವಾಗಿ ಪಕ್ಷದ ವಿಪ್ ಅನ್ನು ಉಲ್ಲಂಘನೆ ಮಾಡಿ ಬಂಡಾಯವಾಗಿ ಸ್ಪರ್ಧಿಸಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರೋದು ಕಂಡು ಬಂದಿದ್ದು ಇಂಥವರ ವಿರುದ್ಧ ನಾವು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಿರುವುದಾಗಿ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಹಾಗೂ ಜಯನಗರದ ಶಾಸಕರಾದ ಪಿ ಜೆ ರಾಮಮೂರ್ತಿ ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್ ಪತ್ರಿಕಾ ವರದಿಗಾರರಾದ ಪ್ರಸನ್ನ ಕುಮಾರ್ ಅವರಿಗೆ ಪ್ರಕಟಣೆಯಲ್ಲಿ ತಿಳಿಸಿದರು