ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

"ಹೆಗ್ಗನಹಳ್ಳಿ ಸುಂಕದಕಟ್ಟೆ ವಾರ್ಡಗಳಲ್ಲಿ ಬಿಜೆಪಿ ಯುವ ಮುಖಂಡ ಹೆಚ್ ಆರ್ ಪ್ರಕಾಶ್ ಬಿಜೆಪಿ ಅಭ್ಯರ್ಥಿ ಎಸ್ ಮುನಿರಾಜು ಪರ ಬಿರುಸಿನ ಮತಯಾಚನೆ"



ಪೀಣ್ಯ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಹೆಗ್ಗನಹಳ್ಳಿ , ಸುಂಕದಕಟ್ಟೆ ವಾರ್ಡನಲ್ಲಿ ಶತಾಯಗತಾಯ ಬಿಜೆಪಿ ಅಭ್ಯರ್ಥಿ ಎಸ್ ಮುನಿರಾಜು ಅವರನ್ನು ಗೆಲ್ಲಿಸಲು ಬಿಜೆಪಿ ಯುವ ಮುಖಂಡ ಹೆಚ್ ಆರ್ ಪ್ರಕಾಶ್ ಮತ್ತು ಅವರ ಆಪ್ತ ಬೆಂಬಲಿಗರು ಕಾಲಿಗೆ ಚಕ್ರ ಕಟ್ಟಿಕೊಂಡು ಮನೆ ಮನೆಗೆ ರಸ್ತೆ ಬೀದಿಗಳಲ್ಲಿ ಬಿಜೆಪಿ ಸರ್ಕಾರಗಳ ಸಾಧನೆ ಮತ್ತು ಹತ್ತು ವರ್ಷ ಶಾಸಕರಾಗಿದ ಹಾಗೂ ಬಿಜೆಪಿ ಅಭ್ಯರ್ಥಿ ಎಸ್ ಮುನಿರಾಜು ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ ಕರಪತ್ರವನ್ನು ಮತದಾರರಿಗೆ ಹಂಚಿ ಮತ ಸೆಳೆಯಲು ಹರಸಾಹಸ ಮಾಡಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ರಾದ ರಂಗಸ್ವಾಮಿ, ನಿಂಗಪ್ಪ, ಸ್ವಾಮಿ,ಬಿಜೆಪಿ ಯುವ ಮುಖಂಡರಾದ ನಂಜುಂಡೇಗೌಡ, ವಿಜಯಕುಮಾರ್, ಸುಚ್ಚಿತ್,ಸೋಮು, ಮಂಜುನಾಥ್ ಬಿಜೆಪಿ ಮುಖಂಡರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಬಿಜೆಪಿ ಅಭ್ಯರ್ಥಿ ಎಸ್ ಮುನಿರಾಜು ಪರ ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು.

Popular posts from this blog

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್

karanataka Fast Express News