ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ದಾಸರಹಳ್ಳಿ ಜೆಡಿಎಸ್ ಅಭ್ಯರ್ಥಿಯಾಗಿ ಆರ್ ಮಂಜುನಾಥ್ ನಾಮಪತ್ರ ಸಲ್ಲಿಕೆ""
ಪೀಣ್ಯ ದಾಸರಹಳ್ಳಿ: ಕ್ಷೇತ್ರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಆರ್ ಮಂಜುನಾಥ್ ಕ್ಷೇತ್ರದ ಶಕ್ತಿ ದೇವತೆ ಮಹೇಶ್ವರಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ವಿಶೇಷವಾಗಿ ವಿಶಿಷ್ಟತೆಯ ಹಳ್ಳಿಯ ಸೊಗಡಿನ ರೈತನ ಮಗನ ಶಕ್ತಿ ಎತ್ತಿನ ಗಾಡಿಯ ಮೂಲಕ 8ನೇ ಮೈಲಿ ಮುಖ್ಯ ರಸ್ತೆಯಿಂದ ಬಾಗಲಗುಂಟೆ ಎಲ್ಲಿರುವ ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಹಿರಿಯ ಮುಖಂಡರಾದ ಮುನಿ ಸ್ವಾಮಣ್ಣ ಹಾಗೂ ಅನ್ನದಾನಪ್ಪ ಸುಶೀಲಮ್ಮ ಮಂಜುನಾಥ ಆರ್ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಕಿರಣ್ ಮತ್ತು ಶ್ರುತಿ ಕಿರಣ್ ಹಿರಿಯ ಮುಖಂಡರು ಹಾಗೂ ಮಹಿಳಾ ಮುಖಂಡರು ಹಾಗೂ ಬ್ಲಾಕ್ ಅಧ್ಯಕ್ಷರು ವಾರ್ಡ್ ಅಧ್ಯಕ್ಷರುಗಳು ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಾಲ್ಗೊಂಡಿದ್ದರು