ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
""ಬಾಗಲಗುಂಟೆ ಮತ್ತು ಡಿಫೆನ್ಸ್ ಕಾಲೋನಿಯಲ್ಲಿ ಮನೆ ಮನೆ ಮಂಜಣ್ಣ ಎನ್ನುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಾರ್ಡ್ ಅಧ್ಯಕ್ಷ""
ಪೀಣ್ಯ ದಾಸರಹಳ್ಳಿ : ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆ ಜೆಡಿಎಸ್ ವಾರ್ಡ್ ಅಧ್ಯಕ್ಷ ಮನೆಮನೆ ಮಂಜಣ್ಣ ಎನ್ನುವ ವಾರ್ಡಿನ ಇಲ್ಲ ಬೀದಿಗಳಲ್ಲಿ ಕಾಲ್ನಡಿಗೆ ಮೂಲಕ ವಾರ್ಡ್ ಜೆಡಿಎಸ್ ಅಧ್ಯಕ್ಷ ಹನುಮಂತ್ ರಾಯಪ್ಪನವರು ಹಮ್ಮಿಕೊಂಡಿದ್ದರು.
ದಾಸರಹಳ್ಳಿ ಕ್ಷೇತ್ರಕ್ಕೆ ಆರ್. ಮಂಜುನಾಥ್ ರಾಜ್ಯಕ್ಕೆ ಎಚ್ ಡಿ ಕುಮಾರಸ್ವಾಮಿ ಅನ್ನುವ ಘೋಷಣೆಯನ್ನು ಕೂಗುತ್ತಾ ಮನೆ ಮನೆಗೆ ಹೋಗಿ ಜೆಡಿಎಸ್ ಮತ ಕೊಡಿ ಕ್ಷೇತ್ರದ ಅಭಿವೃದ್ಧಿಯನ್ನು ಇನ್ನು ಹೆಚ್ಚು ಯೋಜನೆಗಳನ್ನು ಹಾಗೂ ಸೌಕರ್ಯಗಳನ್ನು ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷಕ್ಕೆ ಮತ ಚಲಾಯಿಸುವ ಮೂಲಕ ನಿಮ್ಮ ಬೇಕಾಗಿರುವ ಸೌಕರ್ಯಗಳನ್ನು ನೀವು ಪಡೆದುಕೊಳ್ಳಿ ಎನ್ನುವ ಮಂತ್ರ ಘೋಷವನ್ನು ಹೇಳುತ್ತಾ ಈಗ ಮಾಡಿರುವ ಅಭಿವೃದ್ಧಿಯ ಕೆಲಸಗಳನ್ನು ಜನರ ಮುಂದೆ ಹೇಳುತ್ತಾ ಮನೆ ಮನೆಗೆ ತೆರಳಿ ಹನುಮಂತ ರಾಯಪ್ಪ ಮನವರಕೆ ಮಾಡಿದರು. ಈ ಸಂದರ್ಭದಲ್ಲಿ ಈ ಭಾಗದ ಗೌರವಾಧ್ಯಕ್ಷ ರೇಣುಕಪ್ಪ ಹಿರಿಯ ಮುಖಂಡ ಸದಾಶಿವ ಹಾಗೆ ಮಹಿಳಾ ಮುಖಂಡರಾದ ಡಿಫೆನ್ಸ್ ಕಾಲೋನಿಯ ಛಾಯಾ ಹಾಗೂ ರಂಗನಾಥ್ ಭವ್ಯ ಪಾರ್ವತಮ್ಮ ಜಯಮ್ಮ ನಂದಿನಿ ಮುರಳಿ ಯೋಗೇಶ್ ಇಂದು ಅನೇಕ ಮಹಿಳಾ ಮುಖಂಡರು ಮತ್ತು ಕಾರ್ಯಕರ್ತರು ಈ ಭಾಗದ ವಾರ್ಡ್ ಅಧ್ಯಕ್ಷರಾದ ಹನುಮಂತ ರಾಯಪ್ಪ ನವರಿಗೆ ಸಾತ್ ನೀಡಿದರು