ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
"ಕೆಪಿಸಿಸಿ ನೂತನ ಸದಸ್ಯ ಎಂ ಪರಮೇಶ್ವರ್ ಮಾಕಳಿ ರವರ ಹುಟ್ಟು ಹಬ್ಬದ ಶುಭ ಕೋರಿದ- ಕಾಂಗ್ರೆಸ್ ಅಭ್ಯರ್ಥಿ ಪಿ ಎನ್ ಕೃಷ್ಣಮೂರ್ತಿ"
ಪೀಣ್ಯ ದಾಸರಹಳ್ಳಿ: ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ ಏಕೈಕ ರಾಜಕಾರಣಿ, ಸಮಾಜ ಸೇವಕ ಮತ್ತು ಕೆಪಿಸಿಸಿ ನೂತನ ಸದಸ್ಯ ಎಂ ಪರಮೇಶ್ವರ್ ಮಾಕಳಿ ಅವರು ಎಂದರೆ ತಪ್ಪಾಗಲಾರದು ಎಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕೆಪಿಸಿಸಿ ಸದಸ್ಯ ಪಿ ಎನ್ ಕೃಷ್ಣಮೂರ್ತಿ ಹೇಳಿದರು.
ಅವರು ಎಂ ಪರಮೇಶ್ವರ್ ಮಾಕಳಿ ಅವರಿಗೆ ಶಾಲು ಹೊದಿಸಿ ಮೈಸೂರು ಪೆಟೆ ಧರಿಸಿ ಫಲಪುಷ್ಪದೊಂದಿಗೆ ಗೌರವಿಸಿ ಸಿಹಿ ತಿನ್ನಿಸಿ ಶುಭ ಕೋರಿದರು.
ನಂತರ ಅವರು ಪರಮೇಶ್ವರ್ ಮಾಕಳಿ ರವರು ವರ್ಷದಲ್ಲಿ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಂದ ಹಿಡಿದು ಪಿಯುಸಿ ವರೆಗೆ ಸರ್ಕಾರಿ ಅರೆ ಸರ್ಕಾರಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮವಸ್ತ್ರ ನೋಟ್ ಪುಸ್ತಕ ಪೆನ್ನು ಪೆನ್ಸಿಲ್ ಕೊಡುತ್ತಾ ಬರುತ್ತಿದ್ದಾರೆ ಅದಲ್ಲದೆ ಬಡವರಿಗೆ ನಿರ್ಗತಿಕರಿಗೆ ವಿಚಲಚೇತನರಿಗೆ ಸೀರೆ ಕಂಬಳಿ ಬೆಡ್ ಸೀಟ್ ಹಾಗೂ ಚಿಕಿತ್ಸೆಗಾಗಿ ಅವರ ಕೈಲಾದಷ್ಟು ಧನ ಸಹಾಯ ನೀಡುತ್ತಾ ಬಂದಿದ್ದಾರೆ ಒಟ್ಟಿನಲ್ಲಿ ಸಮಾಜ ಮುಖಿಯಾಗಿ ಕೆಲಸ ಮಾಡುತ್ತಾ ಬರುತ್ತಿದ್ದಾರೆ ಅವರಿಗೆ ತಾಯಿ ಭುವನೇಶ್ವರಿ ತಾಯಿ ಚಾಮುಂಡೇಶ್ವರಿ ತಾಯಿ ಅವರಿಗೆ ಆರೋಗ್ಯ ಐಶ್ವರ್ಯ ಸಕಲ ಸಂಪತ್ತು ಕರುಣಿಸಲಿ ಇನ್ನೂ ಜನ ಸೇವೆ ಮಾಡಲಿಕ್ಕೆ ಹೆಚ್ಚಿನ ಶಕ್ತಿ ನೀಡಲಿ ಎಂದು ಪಿ ಎನ್ ಕೃಷ್ಣಮೂರ್ತಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.