ಕರ್ನಾಟಕ ಫಾಸ್ಟ್ ಪ್ರೆಸ್ ನ್ಯೂಸ್
"" ದಾಸರಹಳ್ಳಿ ಕ್ಷೇತ್ರದ ಶೆಟ್ಟಿಹಳ್ಳಿ ಮೇಲು ಸೇತುವೆಯ ಉದ್ಘಾಟನೆ ಮಾಡಿದ ಶಾಸಕ ಆರ್ ಮಂಜುನಾಥ್"" ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿರುವ ಶೆಟ್ಟಿಹಳ್ಳಿ ಅರಳಿಮರ ರಸ್ತೆಯಿಂದ ಮಲ್ಲಸಂದ್ರ ಸಂಪರ್ಕಿಸುವ *ಸೇತುವೆಯನ್ನ* ಕ್ಷೇತ್ರದ ಶಾಸಕ ಆರ್ ಮಂಜುನಾಥ್ ಉದ್ಘಾಟಿಸಿದರು. ನಂತರ ಶಾಸಕರು ಮಾತನಾಡುತ್ತಾ ಸುಮಾರು ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ರಾಜ ಕಾಲುವೆಯ ಮತ್ತು ರಸ್ತೆಗಳು ಕುಡಿಯುವ ನೀರಿನ ಒಂಟಿಮನೆ ವ್ಯವಸ್ಥೆ ಸುಮಾರು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಲೇ ಬರುತ್ತಿದ್ದೇನೆ ನಾನು ನಮ್ಮ ಸರ್ಕಾರ ಇರುವಾಗ ಸುಮಾರು ಹಣ ಬಿಡುಗಡೆಯಾಗಿದ್ದರು ಅದನ್ನು ಬಿಜೆಪಿ ಸರ್ಕಾರ ಹಿಂಪಡೆದಿತ್ತು ಆದರೂ ನಾನು ಬಿಡದೆ ನನ್ನ ಕ್ಷೇತ್ರಕ್ಕೆ ಅಭಿವೃದ್ಧಿ ಮಾಡುವ ಜವಾಬ್ದಾರಿ ನನಗೆ ಇರುವುದರಿಂದ ನಮ್ಮ ಕ್ಷೇತ್ರದ ಸಾರ್ವಜನಿಕರಿಗೆ ಓಡಾಡಲು ತೊಂದರೆ ಆಗದೆ ರೀತಿಯಲ್ಲಿ ಸಾರ್ವಜನಿಕರಿಗೆ ನಾನುಸಹಕಾರಿಯಾಗಬೇಕಾಗಿದೆ ಎಂದರು ಈ ಸಂದರ್ಭದಲ್ಲಿ ಕ್ಷೇತ್ರದ ಸಂಯೋಜಕರು ಹಾಗೂ ಉಸ್ತುವಾರಿಗಳಾದ ಕೆ ಸಿ ವೆಂಕಟೇಶ್, ವಾರ್ಡ್ ಅಧ್ಯಕ್ಷರಾದ ದವಳಗಿರಿ ಚಂದ್ರಣ್ಣ, ಮಹಿಳಾ ಅಧ್ಯಕ್ಷರಾದ ಲಲಿತಮ್ಮ, ಜೆಡಿಎಸ್ ಹಿರಿಯ ಮುಖಂಡರಾದ ಕೆಂಪಹೋಬಳಿ,ಚಂದ್ರಪ್ಪ, ಸತ್ಯಣ್ಣ, ಗಣೇಶ್, ಸೋಮಣ್ಣ, ಭರತ್ ಗುಡ್ಡಪ್ಪ,ರಾಜಣ್ಣ, ಕೃಷ್ಣಪ್ಪ,ಪಾಪಣ್ಣ, ಶ್ರೀನಿವಾಸ್, ರಂಗನಾಥ ನಾಯಕ, ದೀಪು, ಮಂಜು, ಮೇದರಹಳ್ಳಿ ಮೂರ್ತಿ, ಬಡಾವಣೆಯ ನಿವಾಸಿಗಳು, ಕಾರ್ಯಕರ್ತರು ಹಾಜರಿದ್ದರು,