ಕರ್ನಾಟಕ ಫಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
*ಮಾನ್ಯ ಜನಸ್ನೇಹಿ ಶಾಸಕರಾದ ಶ್ರೀ ಆರ್ ಮಂಜುನಾಥ್ ರವರು ಇಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡ್ ಮೇದರಹಳ್ಳಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ, ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ ಪುತ್ಥಳಿ ನಿರ್ಮಾಣದ ಶಂಕುಸ್ಥಾಪನೆ ಹಾಗೂ ಈ ಭಾಗದ ಜನರ ನೀರಿನ ಸಮಸ್ಯೆ ನೀಗಿಸಲು ನೂತನ ಕೊಳವೆ ಬಾವಿ ಕೊರೆಸಲು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕ್ಷೇತ್ರ ಸಂಯೋಜಕರು ಉಸ್ತುವಾರಿಗಳಾದ ಕೆ.ಸಿ.ವೆಂಕಟೇಶ್, ಜೆಡಿಎಸ್ ಹಿರಿಯ ಮುಖಂಡರಾದ ಶೆಟ್ಟಿಹಳ್ಳಿ ಬೈಲಪ್ಪ, ರಾಮಾಂಜಿ, ಕೆಂಪ ಹೋಬಳಿ ನಾಗಭೂಷಣ್, ಪ್ರಜಾ ವಿಮೋಚನಾ ಸಮಿತಿ ಅಧ್ಯಕ್ಷರಾದ ಮಧುರೆ, ವೆಂಕಟೇಶ್ ಮೂರ್ತಿ, ಚಿಕ್ಕಮರಿಯಪ್ಪ,ಗ್ರಾಮದ ಸ್ಥಳೀಯ ಹಿರಿಯ ಮುಖಂಡರಾದ ರಾಜಣ್ಣ, ನರಸಿಂಹಮೂರ್ತಿ, ಸತೀಶ್, ರಾಜು,ಸೈಮಂಡ್,ರಾಮು, ನಾಗವೇಣಿ,ಸ್ಥಳೀಯ ಮುಖಂಡರು ಕಾರ್ಯಕರ್ತರು ಹಾಗೂ ಮೇದರಹಳ್ಳಿ ನಿವಾಸಿಗಳು ಹಾಜರಿದ್ದರು*.