ಕರ್ನಾಟಕ ಪಾಸ್ಟ್ ಎಕ್ಸ್ ಪ್ರೆಸ್ ನ್ಯೂಸ್
ವಿವಿಧ ಬಡಾವಣೆಗಳಲ್ಲಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಆರ್ ಮಂಜುನಾಥ್
ಪೀಣ್ಯ ದಾಸರಹಳ್ಳಿ :ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆ ವಾರ್ಡ್ ನಿಸರ್ಗ ಬಡಾವಣೆ ಸಿ.ಸಿ ಡ್ರೈನೇಜ್ ರಸ್ತೆ ಅಭಿವೃದ್ಧಿ ಕಾಮಗಾರಿ, ವಿಶ್ವೇಶ್ವರಯ್ಯ ಬಡಾವಣೆ ಸಿ.ಸಿ ಡ್ರೈನೇಜ್ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಮಂಜುನಾಥ ನಗರ ಪೆಪ್ಸಿ ಗೋರ್ಡನ್ ಹಿಂಭಾಗದ ರಸ್ತೆ ಹಾಗೂ ಸೋಪ್ ಫ್ಯಾಕ್ಟರಿ ಬಡಾವಣೆಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕ್ಷೇತ್ರದ ಶಾಸಕ ಆರ್ ಮಂಜುನಾಥ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷರಾದ ಹನುಮಂತರಾಜು ಜೆಡಿಎಸ್ ಹಿರಿಯ ಮುಖಂಡರಾದ ಮುದ್ದಹನುಮೇಗೌಡ, ಹನುಮಂತೇಗೌಡ, ಸದಾಶಿವ,ರೇಣುಕಪ್ಪ, ಉಮೇಶ್, ಕುಮಾರ್, ರಮೇಶ್, ಮಹೇಶ್, ಶಶಿ, ಎಂ.ಡಿ.ಮಹದೇವ್, ರಾಣಿ ಪ್ರತಾಪ್, ಸುರೇಶ್,ಮಂಜು, ಧನಂಜಯ್, ಕುಮಾರಸ್ವಾಮಿ, ಸಿದ್ದೇಗೌಡ, ನಾಗರಾಜ್, ಜಗದೀಶ್, ರವಿ, ರುದ್ರಣ್ಣ, ಸ್ಥಳೀಯ ಮುಖಂಡರು ಕಾರ್ಯಕರ್ತರು ಹಾಜರಿದ್ದರು.